ಪುಟಗಳು

ಗುರುವಾರ, ನವೆಂಬರ್ 26, 2009

ಕುವೆಂಪು ನೆನಪಿನ ಕವಿಗೋಷ್ಠಿ ( ಕುವೆಂಪು ಆದರ್ಶ ಗೆಳೆಯರ ಬಳಗ ) ದಿನಾಂಕ ೨೧-೧೧-೦೯


ಇರಿಯಲು ಕತ್ತಿ ಯಾಕೆ ಬೇಕು?

ಸಾಕು

ಇರಿಯಲು ಕತ್ತಿ ಯಾಕೆ ಬೇಕು?
ಇನ್ನಿಲ್ಲದಂತೆ ಪ್ರೀತಿಸು
ಮರೆತಂತೆ ನಟಿಸು ಸಾಕು
ಮತ್ತೆ ಕೊಲ್ಲಬೇಕೇ ವಿಷವೇಕೆ ಬೇಕು?
ಹ್ಹ್ ಸುಮ್ಮನೆ ತಿರಸ್ಕರಿಸು ಸಾಕು.


ಯಾರು ಹೆಚ್ಚು ಇಲ್ಲಿ ಯಾರು ಕಮ್ಮಿ ?

ಆನೆಗೆ ಸಕ್ಕರೆ ಹರಳೊಂದ ಹಿಡಿದು
ಜೋಪಾನ ಸಾಗಿಸಲು ಆಗದು
ಹಾಗೆ ಇರುವೆಗೆ ಮರದ ದಿಮ್ಮಿ.
ಹೇಳಿ ಸ್ಫ್ವಾಮಿ ಯಾರು ಹೆಚ್ಚು
ಇಲ್ಲಿ ಯಾರು ಕಮ್ಮಿ ?


-ಕನ್ನಡ ನುಡಿ ಪತ್ರಿಕೆ ಅಕ್ಟೋಬರ್ ೨೦೦೯